ಪೂರ್ಣಿಮಾಎಂಟರ್ಪ್ರೈಸಸ್ ಲಾಂಛನದಡಿಯಲ್ಲಿಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮರಾಜ್ಕುಮಾರ್ ನಿರ್ಮಿಸುತ್ತಿರುವಅದ್ದೂರಿಸಿದ್ಧಾರ್ಥಚಿತ್ರಕ್ಕಾಗಿಇದೇ ೨೨ ರಿಂದಐದು ದಿವಸಗಳ ಕಾಲ ಹೈದರಾಬಾದ್ ಸುತ್ತಮುತ್ತಚಿತ್ರೀಕರಣ ನಡೆಯಲಿದೆ.
ಈಗಾಗಲೇ ಬಹುತೇಕಚಿತ್ರೀಕರಣ ಸಂಪೂರ್ಣಗೊಂಡಿದ್ದು, ಹಲವೊಂದು ಸನ್ನಿವೇಶಗಳು ಹಾಗೂ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಹೈದರಾಬಾದ್ಚಿತ್ರೀಕರಣದ ನಂತರಚಿತ್ರತಂಡವುಚಿತ್ರೀಕರಣಕ್ಕಾಗಿ ಗೋವಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ನಟ ನಿರ್ಮಾಪಕರಾಘವೇಂದ್ರರಾಜ್ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆರಘು ಸಮರ್ಥ ಸಂಭಾಷಣೆ, ಸಾಹಿತ್ಯಜಯಂತ್ಕಾಯ್ಕಿಣಿ, ಎಂ.ವಿ. ಕೃಷ್ಣಕುಮಾರ್ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಸಚಿನ್ ಸಂಕಲನ ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ಜಯರಾಮ್.
ಚಿತ್ರದ ಮೂಲಕ ರಾಘವೇಂದ್ರರಾಜ್ಕುಮಾರ್ ಪುತ್ರ ವಿನಯ್ರಾಜ್ಕುಮಾರ್ ನಾಯಕ ನಟನಾಗಿಚಿತ್ರರಂಗ ಪ್ರವೇಶಿಸುತ್ತಿದ್ದು, ಡಾ|| ರಾಜ್ಕುಟುಂಬದ ಮೂರನೇತಲೆಮಾರಿನ ನಾಯಕಇವರಾಗಲಿದ್ದು, ಇವರೊಂದಿಗೆಅಪೂರ್ವಆರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ನಿಕ್ಕಿ, ಗುರುನಂದನ್, ನಯನ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ.